ಮತಬ್ಯಾಂಕ್ ಸಿದ್ಧಪಡಿಸಲು ಬಿಜೆಪಿಗರಿಂದ ಸಮುದಾಯಗಳ ಬಳಕೆ: ಪ್ರಿಯಾಂಕ್ ಖರ್ಗೆ - Mahanayaka

ಮತಬ್ಯಾಂಕ್ ಸಿದ್ಧಪಡಿಸಲು ಬಿಜೆಪಿಗರಿಂದ ಸಮುದಾಯಗಳ ಬಳಕೆ: ಪ್ರಿಯಾಂಕ್ ಖರ್ಗೆ

priyank kharge
24/09/2022

ಕೋಲಿ, ಕಬ್ಬಲಿಗ ಮತ್ತು ತಳವಾರ ಸಮುದಾಯವರು ಹಲವು ವರ್ಷಗಳಿಂದ ST ಮೀಸಲಾತಿ ಬೇಕೆಂದು ಹೋರಾಟ ನಡೆಸುತ್ತಿದ್ದಾರೆ. ನಮ್ಮ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ಕುಲಶಾಸ್ತ್ರೀಯ ಅಧ್ಯಯನ ಮಾಡಿ ನಾವು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಿಕೊಟ್ಟಿದ್ದೆವು.

ಆದರೆ ಬಿಜೆಪಿ ಪಕ್ಷದದವರು ನಾವು ಅಧಿಕಾರಕ್ಕೆ ಬಂದರೆ, ನಮ್ಮ ಡಬಲ್ ಇಂಜಿನ್ ಸರ್ಕಾರ ಕೂಡಲೇ ಈ ಸಮುದಾಯವಾದವರಿಗೆ ST ಮೀಸಲಾತಿ ಕೊಡಿಸುತ್ತೇವೆ ಎಂದು ಹೇಳಿದ್ದರು. ಆದರೆ ಅಧಿಕಾರಕ್ಕೆ ಬಂದು ಮೂರು ವರ್ಷಗಳೇ ಕಳೆದರು ಸಹ ಇದರ ಬಗ್ಗೆ ಧ್ವನಿ ಎತ್ತುತ್ತಿಲ್ಲ ಎಂದು ಪ್ರಿಯಾಂಕ್ ಖರ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಿಜೆಪಿಗರು ಸಮುದಾಯಗಳನ್ನು ತಮ್ಮ ರಾಜಕೀಯಕ್ಕಾಗಿ ಮತಬ್ಯಾಂಕ್ ಸಿದ್ಧಪಡಿಸುವುದಕ್ಕಾಗಿ ಇಂತಹ ಸುಳ್ಳು ಭರವಸೆಗಳನ್ನು ನೀಡಿ, ಸಮುದಾಯಗಳು ವ್ಯವಸ್ಥೆ ಮೇಲಿನ ಭರವಸೆಗಳನ್ನೇ ಕಳೆದುಕೊಳ್ಳುವಂತೆ ಮಾಡುತ್ತಿದ್ದಾರೆ ಎಂದಿದ್ದಾರೆ.

ಈ ಕುರಿತು ಸದನದಲ್ಲಿ ವಿಧಾನಸಭೆ ಸ್ಪೀಕರ್ ಅವರಿಗೆ ಶೂನ್ಯ ವೇಳೆಯಲ್ಲಿ ಚರ್ಚೆಗೆ ಪ್ರಸ್ತಾವನೆ ಸಲ್ಲಿಸಿದ್ದೇನೆ. ಆದರೆ ಈ ಬಿಜೆಪಿ ಸರ್ಕಾರ ಪ್ರಸ್ತಾವನೆಗೆ ಅವಕಾಶವನ್ನು ಕೊಡದೆ, ಚರ್ಚೆಗೆ ಅವಕಾಶವನ್ನು ನೀಡದೆ, ಬಿಜೆಪಿಗರು ಕೋಲಿ ಮತ್ತು ತಳವಾರ ಸಮುದಾಯದವರಿಗೆ ಕೊಟ್ಟಿದ್ದ ಮಾತನ್ನು ಮುರಿದಿದ್ದಾರೆ. ಮುಂದಿನ ದಿನಗಳಲ್ಲಿ ಕೋಲಿ ಮತ್ತು ತಳವಾರದ ಸಮುದಾಯದವರ ಜೊತೆ ಚರ್ಚೆಸಿ ಕಾಂಗ್ರೆಸ್ ಪಕ್ಷ ಬೃಹತ್ ಹೋರಾಟವನ್ನು ರೂಪಿಸಲಿದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

 

ಇತ್ತೀಚಿನ ಸುದ್ದಿ