ಸ್ವಿಟ್ಜರ್ಲೆಂಡ್ ಪ್ರವಾಸಿಗರ ಆಟೋಸಫಾರಿ: 7,000 ಕಿ.ಮೀ. ದಕ್ಷಿಣ ಭಾರತ ಸಂಚಾರ! - Mahanayaka

ಸ್ವಿಟ್ಜರ್ಲೆಂಡ್ ಪ್ರವಾಸಿಗರ ಆಟೋಸಫಾರಿ: 7,000 ಕಿ.ಮೀ. ದಕ್ಷಿಣ ಭಾರತ ಸಂಚಾರ!

switzerland tourist
13/03/2025

ಚಿಕ್ಕಮಗಳೂರು:  ಭಾರತದ ಸಂಸ್ಕೃತಿ, ಪ್ರಕೃತಿ ಸೌಂದರ್ಯ, ಮತ್ತು ಊಟದ ರುಚಿಯ ಆಶಯದಲ್ಲಿ ಸ್ವಿಟ್ಜರ್ಲೆಂಡ್‌ ನ ಮೂವರು ಪ್ರವಾಸಿಗರು ಆಟೋದಲ್ಲಿ 7,000 ಕಿ.ಮೀ. ಪ್ರಯಾಣ ನಡೆಸಿದ್ದಾರೆ. ಗೋವಾದಿಂದ ಆಟೋ ಬಾಡಿಗೆ ತೆಗೆದುಕೊಂಡ ಈ ವಿದೇಶಿ ಪ್ರವಾಸಿಗರು, ತಾವೇ ವಾಹನ ಓಡಿಸುತ್ತಾ ಕರ್ನಾಟಕ, ಕೇರಳ, ತಮಿಳುನಾಡು, ಮಹಾರಾಷ್ಟ್ರ, ಮತ್ತು ಗೋವಾದ ದಟ್ಟ ಅರಣ್ಯ, ಕಡಲು, ಬೆಟ್ಟ ಮತ್ತು ನಗರ ಜೀವರಾಸಿಕೆಯನ್ನು ಅನುಭವಿಸಿದ್ದಾರೆ.

ಚಿಕ್ಕಮಗಳೂರಿಗೂ ಭೇಟಿ:

ಪ್ರಕೃತಿಯ ಸೌಂದರ್ಯದ ಗುಂಗಿನಲ್ಲಿ, ಈ ಪ್ರವಾಸಿಗರು ಕರ್ನಾಟಕದ ಪ್ರಸಿದ್ಧ ಹಿಲ್‌’ಸ್ಟೇಷನ್‌ ಚಿಕ್ಕಮಗಳೂರಿಗೂ ಭೇಟಿ ನೀಡಿದ್ದಾರೆ. ಇಲ್ಲಿನ ಹಸಿರು ತೋಟಗಳು, ಮಳೆಯ ಸಮೇತದ ಹವಾಮಾನ ಮತ್ತು ಕಾಫಿ ಬೆಳೆಗಾರರ ಆತಿಥ್ಯ ಪ್ರವಾಸಿಗರನ್ನು ಆಕರ್ಷಿಸಿದೆ. ಬಾಬಾಬುಡನ್‌’ಗುಡ್ಡ, ಮುಳ್ಳಯ್ಯನಗಿರಿ, ಮತ್ತು ಹೆಬ್ಬೆ ಜಲಪಾತಗಳಿಗೆ ಭೇಟಿ ನೀಡಿ, ಇಲ್ಲಿನ ಅಪೂರ್ವ ನಿಸರ್ಗವನ್ನು ಅನುಭವಿಸಿದ್ದಾರೆ.

ಭಾರತದ ಸೌಂದರ್ಯಕ್ಕೆ ಫಿದಾ!


Provided by
Provided by

ಪ್ರವಾಸದ ಅನುಭವವನ್ನು ಹಂಚಿಕೊಂಡ ಈ ಪ್ರವಾಸಿಗರು, “ಭಾರತ ಅನಿರೀಕ್ಷಿತ ಸುಂದರ ದೇಶ! ಇಲ್ಲಿ ಪ್ರತಿ ರಾಜ್ಯವೂ ವಿಭಿನ್ನ ಆಕರ್ಷಣೆಯನ್ನಿಡಿದೆ,” ಎಂದಿದ್ದಾರೆ. ವಿಶೇಷವಾಗಿ, ಭಾರತೀಯ ಆಹಾರದ ವೈವಿಧ್ಯತೆ ಮತ್ತು ರುಚಿಯನ್ನು ಅವರು ಮೆಚ್ಚಿ ಹಾಡಿಹೋಗಿದ್ದಾರೆ.

“ಭಾರತದ ದಕ್ಷಿಣ ಭಾಗ ಅತ್ಯಂತ ಅಚ್ಚರಿಯ ತಾಣ! ಭಾರತೀಯರು ಸ್ನೇಹಪರರು, ಭಾರತೀಯ ಆಹಾರ ರುಚಿಕರ! ದಕ್ಷಿಣ ಭಾರತದ ಪ್ರಾಕೃತಿಕ ಸುಂದರ್ಯ ಮಂತ್ರಮುಗ್ಧಗೊಳಿಸುವಂತಿದೆ,” ಎಂದಿದ್ದಾರೆ ಪ್ರವಾಸಿಗರು.

ವಿದೇಶಿಗಳ ಆಟೋ ಪ್ರಯಾಣ:  ವಿಶೇಷ ಆಕರ್ಷಣೆ

ಹಣಿಗೆ ಬಾವುಟಗಳೊಂದಿಗೆ ಸಂಚರಿಸುತ್ತಿರುವ ಈ ಆಟೋ, ಜನರ ಗಮನ ಸೆಳೆಯುತ್ತಿದೆ. ಒಂದು ಬದಿಯಲ್ಲಿ ಭಾರತದ ತ್ರಿವರ್ಣ ಧ್ವಜ, ಮತ್ತೊಂದು ಬದಿಯಲ್ಲಿ ಸ್ವಿಟ್ಜರ್ಲೆಂಡ್ ಬಾವುಟವಿರುವ ಈ ಆಟೋ ಎಲ್ಲರಿಗೂ ಕುತೂಹಲ ಮೂಡಿಸುತ್ತಿದೆ.

ಪ್ರಸಕ್ತ ಪ್ರವಾಸವನ್ನು ಮುಗಿಸಿಕೊಂಡು ಸ್ವಿಸ್ಸಿನಿಂದ ಬಂದಿರುವ ಈ ಪ್ರವಾಸಿಗರು ಶೀಘ್ರವೇ ತಮ್ಮ ತವರು ದೇಶಕ್ಕೆ ಮರಳಲಿದ್ದಾರೆ. ಆದರೆ, ಭಾರತದ ಪ್ರೇಕ್ಷಣೀಯ ತಾಣಗಳು ಮತ್ತು ಭಾರತೀಯರ ಆತಿಥ್ಯ ಮನಸ್ಸಿನಲ್ಲಿ ಶಾಶ್ವತ ನೆನಪಾಗಿ ಉಳಿಯಲಿದೆ ಎಂದು ಅವರು ತಿಳಿಸಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/BR3b3qhWZWaCzpD1m6N5uu

ಇತ್ತೀಚಿನ ಸುದ್ದಿ