ಜುಲೈ 10ವರೆಗೆ ರಾಜ್ಯದಲ್ಲಿ ಭಾರೀ ಮಳೆ ಅಬ್ಬರ! ನಿಮ್ಮ ಜಿಲ್ಲೆಯ ಮಳೆ ವಿವರ ತಿಳಿಯಿರಿ - Mahanayaka

ಜುಲೈ 10ವರೆಗೆ ರಾಜ್ಯದಲ್ಲಿ ಭಾರೀ ಮಳೆ ಅಬ್ಬರ! ನಿಮ್ಮ ಜಿಲ್ಲೆಯ ಮಳೆ ವಿವರ ತಿಳಿಯಿರಿ

rain
04/07/2025

ಬೆಂಗಳೂರು:  ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಇಂದಯ ಭಾರೀ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ. ಹಾಸನ, ಶಿವಮೊಗ್ಗ, ಚಿಕ್ಕಮಗಳೂರು, ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಲಾಗಿದೆ.

ಜುಲೈ 10ರವರೆಗೂ ರಾಜ್ಯದಲ್ಲಿ ಭಾರೀ ಮಳೆಯಾಗಲಿದ್ದು, ಬೆಳಗಾವಿ,ಕೊಡಗು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಣೆ ಮಾಡಿದ್ದರೆ, ಧಾರವಾಡಕ್ಕೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

ಇನ್ನುಳಿದಂತೆ   ಬೀದರ್, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ತುಮಕೂರು, ವಿಜಯನಗರದಲ್ಲಿ ಮಳೆಯಾಗಲಿದೆ.

ಕ್ಯಾಸಲ್ ​​ರಾಕ್, ಕೊಪ್ಪ, ಕಮ್ಮರಡಿ, ಆಗುಂಬೆ, ಕದ್ರಾ, ಸಿದ್ದಾಪುರ, ಜಯಪುರ, ಕೊಪ್ಪ, ಎನ್. ಆರ್.ಪುರ, ಬೆಳ್ತಂಗಡಿ, ಅಂಕೋಲಾ, ಮೂಡುಬಿದಿರೆ, ಕಾರವಾರ, ಧರ್ಮಸ್ಥಳ, ಶಿರಾಲಿ, ಸೋಮವಾರಪೇಟೆ, ಭಾಗಮಂಡಲ, ಲೋಂಡಾ, ಪುತ್ತೂರು, ಕಳಸ, ಜೋಯ್ಡಾ, ಕಾರ್ಕಳ, ಕುಮಟಾ, ಗೇರುಸೊಪ್ಪ, ಬನವಾಸಿಯಲ್ಲಿ ಭಾರೀ ಮಳೆಯಾಗಿದೆ.

ಮುಲ್ಕಿ, ಉಡುಪಿ, ಮಂಗಳೂರು, ಮಾಣಿ, ಕುಂದಾಪುರ, ಬಂಟ್ವಾಳ, ಶಕ್ತಿನಗರ, ಮಾಣಿ, ಖಾನಾಪುರ, ಹುಂಚದಕಟ್ಟೆ, ನಾಪೋಕ್ಲು, ತ್ಯಾಗರ್ತಿ, ಚಿಕ್ಕಬಳ್ಳಾಪುರ, ದಾವಣಗೆರೆ, ಪೊನ್ನಂಪೇಟೆ, ಕೋಟಾ, ಹಿರೆಕೆರೂರು, ಸರಗೂರು, ಹೊನ್ನಾವರ, ಸಂಕೇಶ್ವರ, ಕಿತ್ತೂರು, ಕುಷ್ಟಗಿ, ಮುದಗಲ್, ಮಾನ್ವಿ, ಹಳಿಯಾಳ, ಮುಂಡಗೋಡ, ಚನ್ನಗಿರಿ, ನಾಯಕನಹಟ್ಟಿ, ಹಗರಿಬೊಮ್ಮನಹಳ್ಳಿ, ಬರಗೂರು, ಕುಶಾಲನಗರ, ಕೋಲಾರ, ಬೇಳೂರು, ಅಜ್ಜಂಪುರ, ಪರಶುರಾಂಪುರದಲ್ಲಿ ಮಳೆಯಾಗಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ