ಕ್ರೈಸ್ತರ ಮೇಲೆ ದಾಳಿ ಮಾಡಿ ಎಂದ ಹಿಂದೂತ್ವ ನಾಯಕ: ಆದೇಶ್ ಸೋನಿ ದ್ವೇಷದ ಭಾಷಣ ವೈರಲ್ - Mahanayaka

ಕ್ರೈಸ್ತರ ಮೇಲೆ ದಾಳಿ ಮಾಡಿ ಎಂದ ಹಿಂದೂತ್ವ ನಾಯಕ: ಆದೇಶ್ ಸೋನಿ ದ್ವೇಷದ ಭಾಷಣ ವೈರಲ್

24/02/2025

ಕ್ರೈಸ್ತರ ಮೇಲೆ ದಾಳಿ ನಡೆಸಬೇಕು ಮತ್ತು ಮಹಿಳೆಯರ ಮೇಲೆ ಅತ್ಯಾಚಾರ ನಡೆಸಬೇಕು ಎಂದು ಛತ್ತೀಸ್ ಗಢದ ಆದೇಶ್ ಸೋನಿ ಎಂಬಾತ ಕರೆ ಕೊಟ್ಟಿರುವುದು ಭಾರೀ ವಿವಾದಕ್ಕೆ ಕಾರಣವಾಗಿದೆ. ಸೋಶಿಯಲ್ ಇನ್ಫ್ಲುಯೆನ್ಸರ್ ಆಗಿರುವ ಈತ ಹಿಂದೂತ್ವ ನಾಯಕನಾಗಿ ಗುರುತಿಸಿಕೊಂಡಿದ್ದಾನೆ. ಬಿ ಶ್ರಾಂಪುರ್ ಗಣೇಶ್ ಪೂರ್, ಗಾಂಕ್ ಪೂರ್ ಮುಂತಾದ ಗ್ರಾಮಗಳ ಕ್ರೈಸ್ತರ ಮೇಲೆ ದಾಳಿ ನಡೆಸಬೇಕು, ಮಹಿಳೆಯರ ಮೇಲೆ ಅತ್ಯಾಚಾರ ನಡೆಸಿ ಹತ್ಯೆ ಮಾಡಬೇಕು ಎಂದು ಈತ ಕರೆ ಕೊಟ್ಟಿದ್ದಾನೆ. ಕ್ರೈಸ್ತರು ಮತಾಂತರ ನಡೆಸ್ತಾ ಇದ್ದಾರೆ ಎಂದು ಆರೋಪಿಸಿ ಆತ ಈ ಕರೆ ನೀಡಿದ್ದಾನೆ.


Provided by

ಕ್ರೈಸ್ತರ ಮನೆಗಳಿಗೆ ನುಗ್ಗಿ ಮಹಿಳೆಯರ ಮೇಲೆ ಅತ್ಯಾಚಾರ ನಡೆಸಬೇಕು. ಅವರ ನಾಯಕರ ಹತ್ಯೆ ನಡೆಸಬೇಕು. ಮಾರ್ಚ್ ಒಂದರಂದು ಈ ದಾಳಿ ನಡೆಸಬೇಕಾಗಿದ್ದು ಇದಕ್ಕಾಗಿ 50000 ಮಂದಿಯನ್ನು ಸಿದ್ಧಗೊಳಿಸಬೇಕು. ಇದಕ್ಕೆ ಆಡಳಿತದ ಬೆಂಬಲವಿದೆ ಎಂದು ಆತ ಸೋಶಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದಾನೆ. ಈ ಕರೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಪ್ರಮಾಣದಲ್ಲಿ ಹಂಚಿಕೆಯಾಗಿದೆ.

ಕ್ರೈಸ್ತರ ವಿರುದ್ಧ ದ್ವೇಷ ಭಾಷಣಕ್ಕೆ ಈತ ಕುಪ್ರಸಿದ್ಧಿಯನ್ನು ಪಡೆದಿದ್ದಾನೆ. ಕವಿ ಟ್ರೈನರ್ ಬರಹಗಾರನಾಗಿಯೂ ಈತ ಗುರುತಿಸಿಕೊಂಡಿದ್ದಾನೆ.


Provided by

ಮಹಿಳೆಯರನ್ನು ಬೆತ್ತಲೆ ಮಾಡಿ ಬಹಿರಂಗವಾಗಿ ಅವಮಾನಿಸಬೇಕು. ಅವರ ಧರ್ಮದ ಯಾವ ಕುರುಹುಗಳೂ ಉಳಿಯದಂತೆ ನೋಡಿಕೊಳ್ಳಬೇಕು ಎಂದಾತ ಕರೆ ನೀಡಿದ್ದಾನೆ. ಪ್ರಯಾಗ್ ರಾಜ್ ನಲ್ಲಿ ಶಂಕರಾಚಾರ್ಯ ಅವಿಮುಕ್ತೇಶ್ವರಾನಂದ ಸರಸ್ವತಿ ಸ್ವಾಮಿ ನಡೆಸಿರುವ ಭಾಷಣವನ್ನು ತನ್ನ ಮಾತಿನ ನಡುವೆ ಈತ ಉಲ್ಲೇಖಿಸಿದ್ದಾನೆ. ಹಿಂದೂಗಳು ಎಲ್ಲಾ ಕ್ರೈಸ್ತರನ್ನು ಹತ್ಯೆ ನಡೆಸಬೇಕು ಮತ್ತು ಯಾರನ್ನೂ ಸುಮ್ಮನೆ ಬಿಡಬಾರದು ಎಂದು ಪ್ರಯಾಗ್ ರಾಜ್ ನಲ್ಲಿ ಅವಿಮುಕ್ತೇಶ್ವರಾನಂದ ಸರಸ್ವತಿ ಸ್ವಾಮೀಜಿ ಹೇಳಿಕೆ ನೀಡಿದ್ದರು ಎಂದು ತಿಳಿದುಬಂದಿದೆ.

ನಮ್ಮ ತಾಯಿಯಾದ ಗೋವನ್ನು ಯಾರು ಹತ್ಯೆ ಮಾಡ್ತಾರೋ ಅವರನ್ನು ನಾವು ಹತ್ಯೆ ಮಾಡುತ್ತೇವೆ . ಗೋವನ್ನು ಹತ್ಯೆ ಮಾಡುವವರಿಗೆ ಗಲ್ಲು ಶಿಕ್ಷೆ ಅನಿವಾರ್ಯವಾಗಿದೆ. ಅವರನ್ನು ಹತ್ಯೆ ಮಾಡಿ ನೀವು ಗಲ್ಲು ಶಿಕ್ಷೆಗೆ ಆಗ್ರಹಿಸಿ. ಈ ಕಾನೂನು ಜಾರಿ ಯಾಗುವವರೆಗೆ ನೀವು ಕಾಯುತ್ತಲೇ ಇರಿ ಎಂದು ಅವರು ಹೇಳಿರುವುದಾಗಿ ವರದಿಯಾಗಿತ್ತು.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ