ಉಪ ಚುನಾವಣೆ: ಕ್ಷೇತ್ರ ಬಿಟ್ಟು ಹೊರ ಹೋಗುವಂತೆ ಪಕ್ಷಗಳ ನಾಯಕರು,  ಕಾರ್ಯಕರ್ತರಿಗೆ ಚು.ಆಯೋಗ ಸೂಚನೆ - Mahanayaka
11:25 PM Thursday 13 - November 2025

ಉಪ ಚುನಾವಣೆ: ಕ್ಷೇತ್ರ ಬಿಟ್ಟು ಹೊರ ಹೋಗುವಂತೆ ಪಕ್ಷಗಳ ನಾಯಕರು,  ಕಾರ್ಯಕರ್ತರಿಗೆ ಚು.ಆಯೋಗ ಸೂಚನೆ

01/11/2020

ಬೆಂಗಳೂರು: ರಾಜ್ಯದಲ್ಲಿ ಶಿರಾ ಮತ್ತು ಆರ್.ಆರ್.ನಗರ ಕ್ಷೇತ್ರದ ವಿಧಾನಸಭಾ ಉಪ ಚುನಾವಣಾ ಕಣ ರಂಗೇರಿದ್ದು, ರಾಜಕೀಯ ಜಿದ್ದಾಜಿದ್ದಿನ ಪ್ರಚಾರದ ಬಳಿಕ ಇಂದು ಸಂಜೆ 6ಗಂಟೆಗೆ ಬಹಿರಂಗ ಪ್ರಚಾರಕ್ಕೆ ತೆರೆಬೀಳಲಿದೆ.
Inside artilce ad


ಬಹಿರಂಗ ಪ್ರಚಾರದ ಬಳಿಕ ಕ್ಷೇತ್ರದವರಲ್ಲದವರು, ಕ್ಷೇತ್ರದಿಂದ ಹೊರ ಹೋಗುವಂತೆ ತಿಳಿಸಲಾಗಿದೆ.  ನಾಳೆ ಮನೆಮನೆಗಳಿಗೆ ತೆರಳಿ ಪ್ರಚಾರ ಮಾಡಲು ಅವಕಾಶವಿರುತ್ತದೆ.
Inside artilce ad


ಚುನಾವಣಾ ಪ್ರಚಾರದ ಸಲುವಾಗಿ ಕ್ಷೇತ್ರಕ್ಕೆ ಹೊರಗಿನಿಂದ ಆಗಮಿಸಿರುವ ಪಕ್ಷಗಳ ಮುಖಂಡರು, ಕಾರ್ಯಕರ್ತರು ಕ್ಷೇತ್ರದಿಂದ ತೆರಳುವಂತೆ ಚುನಾವಣಾ ಆಯೋಗ ಸೂಚನೆ ನೀಡಿದೆ.  ಪ್ರಚಾರದ ಕೊನೆಯ ದಿನವಾದ ಇಂದು ನಾಯಕರ ದಂಡೇ ನೆರೆದು ಬಹಿರಂಗ ಪ್ರಚಾರ ನಡೆಸುವ ಸಾಧ್ಯತೆ ಇದೆ.
Inside artilce ad


 

ಇತ್ತೀಚಿನ ಸುದ್ದಿ