KPCC ಪ್ರಚಾರ ಸಮಿತಿಗೆ ನೂತನ ಪದಾಧಿಕಾರಿಗಳ ನೇಮಕ - Mahanayaka
12:42 AM Friday 11 - September 2026

KPCC ಪ್ರಚಾರ ಸಮಿತಿಗೆ ನೂತನ ಪದಾಧಿಕಾರಿಗಳ ನೇಮಕ

congress
31/07/2025

ಬೆಂಗಳೂರು: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ(KPCC)ಯ ಪ್ರಚಾರ ಸಮಿತಿಗೆ ಹೊಸ ಪದಾಧಿಕಾರಿಗಳನ್ನು  ತಕ್ಷಣಕ್ಕೆ ಜಾರಿಗೆ ಬರುವಂತೆ  AICC ಆದೇಶ ಹೊರಡಿಸಿದೆ.

ಈಗಾಗಲೇ ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಕೆಪಿಸಿಸಿ ಪ್ರಚಾರ ಸಮಿತಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದು, ಸಹ ಅಧ್ಯಕ್ಷರಾಗಿ ಮಾಜಿ ರಾಜ್ಯಸಭಾ ಸದಸ್ಯ ಡಾ. ಎಲ್‌. ಹನುಮಂತಯ್ಯ ನೇಮಕಗೊಂಡಿದ್ದಾರೆ.

ಇನ್ನು ಸಮಿತಿಗೆ ಮಾಜಿ ಶಾಸಕ ಜೆ.ಆರ್. ಲೋಬೋ ಸೇರಿದಂತೆ ಹತ್ತು ಉಪಾಧ್ಯಕ್ಷರನ್ನು ನೇಮಕ ಮಾಡಲಾಗಿದೆ. ‌ಹನ್ನೆರಡು ಮುಖ್ಯ ಸಂಯೋಜಕರ ಪೈಕಿ ಕೃಪಾ ಆಳ್ವ ಮತ್ತು ಕೆ.ಪಿ. ಜಾನಿ ಕಲ್ಲುಗುಂಡಿ ಸ್ಥಾನ ಪಡೆದಿದ್ದು, ಫಾರೂಕ್ ಉಳ್ಳಾಲ್, ಶಶಿಕಿರಣ್ ರೈ, ಚಂದ್ರಹಾಸ್ ಶೆಟ್ಟಿ, ಇಬ್ರಾಹಿಂ ಗೂನಡ್ಕ ಮತ್ತು ಪದ್ಮ ಪ್ರಸಾದ್ ಜೈನ್ ಸೇರಿದಂತೆ 42 ಮಂದಿಯನ್ನು ಸಂಯೋಜಕರಾಗಿ ನೇಮಕ ಮಾಡಲಾಗಿದೆ.

ಸಹ ಅಧ್ಯಕ್ಷರು: ಡಾ.ಎಲ್.ಹನುಮಂತಯ್ಯ

ಉಪಾಧ್ಯಕ್ಷರು:  ರಾಣಿ ಸತೀಶ್,  ಕಿಮ್ಮಣ್ಣೆ ರತ್ನಾಕರ್,   ಜೆ.ಆರ್.ಲೋಬೊ, ಎಂ. ಶಿವಣ್ಣ, ಜಲಜಾ ನಾಯ್ಕ್,  ವೀಣಾ ಅಚ್ಚಯ್ಯ, ಜೆ.ಡಿ.ನಾಯ್ಕ್, ಜಿ.ಮಂಜುನಾಥ್, ಡಾ.ಭೆಮ್ಮಣ್ಣ ಮೇಟಿ, ಅಬ್ದುಲ್ ಮುನೀರ್ ಆಯ್ಕೆಯಾಗಿದ್ದಾರೆ.

ಮುಖ್ಯ ಸಂಯೋಜಕರು: ಪ್ರಕಾಶ್ ಕೆ. ರಾಥೋಡ್ ಮಾಜಿ MLC, ಡಾ.ಸಿ.ಎಸ್.ದ್ವಾರಕಾನಾಥ್, ಸುದೀರ್ ಮುರೊಳ್ಳಿ, ಪ್ರಸಾದ್ ಬಾಬು, ಕೃಪಾ ಆಳ್ವ, ಆದರ್ಶ್ ಯಲ್ಲಪ್ಪ, ಎಸ್. ನಾರಾಯಣ್, ಯೋಗೇಶ್ವರಿ ವಿಜಯ್, ಜಾನಿ ಕಲ್ಲುಗುಂಡಿ ಕೆ.ಪಿ.,  ಶ್ರೀ ಶರಣಪ್ಪ ಕೊಟಗಿ, ಶಂಬು ಶೆಟ್ಟಿ, ವಸಂತ ಲದ್ವಾ ಆಯ್ಕೆಯಾಗಿದ್ದಾರೆ.

ಸಂಯೋಜಕರು:  ಅಮರನಾಥ, ಅಮರನಾಥ ಟಿ., ಎನ್.ಎಂ.ಗಿರಿ, ಇಬ್ರಾಹಿಂ ಗೊನ್ನಡ್ಕ, ಪದ್ಮ ಪ್ರಸಾದ್ ಜೈನ್, ಸುಧೀಂದ್ರ ಜಾಗೀರದಾರ, ಯಶೋಧರ್ ಮೂರ್ತಿ ಜಿ.ಆರ್.,  ಸೂರ್ಯ ಮುಕುಂದರಾಜ್, ತೇಜಸ್ವಿ ರಾಜ್, ಕೆ.ಪಿ. ಥಾಮಸ್, ಗೋಪಾಲಕೃಷ್ಣ, ಕುಮಾರಗೌಡ ಜಿ.ಎಸ್., ರವೀಂದ್ರ ಎ.ಎ., ವೆಂಕಟೇಶ ಹೆಗಡೆ, ಡಾ.ನಿಶ್ಚಲ್ ಕೊಡಗು, ವೆಂಕಣ್ಣ ಯಾದವ್, ಬಾಲಸ್ವಾಮಿ, ಚಂದ್ರಹಾಸ ಶೆಟ್ಟಿ, ಸಿ.ಆರ್.ನಟರಾಜು, ಆನಂದ್ ಕುಮಾರ್, ಶಶಿ ಕಿರಣ್ ರೈ, ಪ್ರವೀಣ್ ನಾಯಕ್,  ಸಾಹುಕಾರ್ ಶಂಕ್ರಪ್ಪ, ಲತಾ ಎಸ್.ಎನ್.,  ಮಂಜುಳಾ ವಿ., ಸುರೇಖಾ ಪೂಜಾರ್, ಸುನಿತಾ ಐಹೊಳೆ, ಸುನಿತಾ ಹುರಗಡ್ಲೆ, ದೀಪಾ ಮುನಿರಾಜು, ಜ್ಯೋತಿ ಪಾಟೀಲ್, ಸಂದೀಪ್ ಕುಮಾರ್ ಬೋಸಪ್ಪ ಆರ್., ಮಹಾಬಲೇಶ್ವರ ಎಸ್.ಜಿ., ಅನಂತ್ ಕುಮಾರ್ ಎಂ.ಎಸ್., ವಾಸುದೇವಮೂರ್ತಿ, ಪುಂಡಲೀಕ ನೀರ್ಲಕಟ್ಟಿ, ಶ್ರೀನಿವಾಸ್ ಎನ್., ಜಾವೇದ್ ಅಹ್ಮದ್, ಫಾರೂಕ್ ಉಳ್ಳಾಲ, ಮಜರ್ ಆಲಂ ಖಾನ್, ಕಿರಣ್ ಸಾದುನ್ನವರ್ ಆಯ್ಕೆಯಾಗಿದ್ದಾರೆ.

ಸಾಮಾಜಿಕ ಮಾಧ್ಯಮದ ಮುಖ್ಯ ಸಂಯೋಜಕರಾಗಿ ವಿಜೇತ್ ವೀರಪ್ಪ ಸಾಲಿಯಾನ್, ಸಂಯೋಜಕರಾಗಿ ಅನೂಪ್ ಪ್ರತಮ್ ಆಯ್ಕೆಯಾಗಿದ್ದಾರೆ.  ಮಾಧ್ಯಮ ವಿಭಾಗದ ಮುಖ್ಯ ಸಂಯೋಜಕರಾಗಿ ಎ.ಎನ್. ನಟರಾಜ್ ಗೌಡ,  ಕೋ-ಆರ್ಡಿನೇಟರ್ ಆಗಿ ದೀಪಕ್ ಎಸ್. ಕುಮಾರ್ ಆಯ್ಕೆಯಾಗಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ

mobil chat sitesi Ucuz Uçak Bileti deneme bonusu veren siteler deneme bonusu veren siteler