ಪಿಎಫ್ ಐ ಬ್ಯಾನ್ ವಿಚಾರ: ಜೆಡಿಎಸ್ ಮುಖಂಡ ಎಸ್.ಎಲ್.ಭೋಜೇಗೌಡ ಪ್ರತಿಕ್ರಿಯೆ - Mahanayaka
10:39 AM Friday 14 - February 2025

ಪಿಎಫ್ ಐ ಬ್ಯಾನ್ ವಿಚಾರ: ಜೆಡಿಎಸ್ ಮುಖಂಡ ಎಸ್.ಎಲ್.ಭೋಜೇಗೌಡ ಪ್ರತಿಕ್ರಿಯೆ

s l bojegowda
29/09/2022

ಮಂಗಳೂರು: ಪಿಎಫ್ ‌ಐ ಹಾಗೂ ಸಹ ಸಂಘಟನೆಗಳ ನಿಷೇಧ ಹಾಗೂ ನಾಯಕರ ಮೇಲಿನ ದಾಳಿ ಬಗ್ಗೆ ವಿಧಾನ ಪರಿಷತ್ ಸದಸ್ಯ ಹಾಗೂ ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್.ಎಲ್. ಭೋಜೇಗೌಡ ಪ್ರತಿಕ್ರಿಯಿಸಿದರು.

ಮಂಗಳೂರು ನಗರದ ಸರ್ಕ್ಯೂಟ್ ಹೌಸ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,  ಯಾವುದೇ ಸಂಸ್ಥೆ ಅಥವಾ ಸಂಘಟನೆಗಳು ಅಥವಾ ವೈಯಕ್ತಿಕವಾಗಿ ಪ್ರಚೋದನಾಕಾರಿ ಭಾಷಣ ಮಾಡುವುದು, ಜನರನ್ನು ರೊಚ್ಚಿಗೆಬ್ಬಿಸುವುದು, ಸಮಾಜದಲ್ಲಿ ಅಶಾಂತಿ ಮೂಡಿಸುವ ಕೆಲಸ ಮಾಡಿದ್ದಲ್ಲಿ ಅಂಥವರ ಮೇಲೆ ಕಾನೂನು ಕ್ರಮಕ್ಕೆ ಸಂವಿಧಾನದಲ್ಲಿ ಅವಕಾಶವಿದೆ. ಅದು ಆರೆಸ್ಸೆಸ್, ಪಿಎಫ್ ‌ಐ ಅಥವಾ ನಮ್ಮದೇ ಯಾವುದೇ ಸಂಘಟನೆ, ಸಂಸ್ಥೆ ಆಗಿದ್ದರೂ ಕ್ರಮ ಕೈಗೊಳ್ಳಬಹುದಾಗಿದೆ ಎಂದರು.

ಪಿಎಫ್ ಐ ಕಾರ್ಯಕರ್ತರು ಮಾಡಿರುವ  ಅಪರಾಧಗಳನ್ನು ಸರ್ಕಾರವು ಜನರ ಮುಂದೆ ಇಟ್ಟರೆ ಸೂಕ್ತ ಎಂದು ಇದೇ ವೇಳೆ ಅವರು ಹೇಳಿದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ