ನಾನು ಶೇ.30ರಷ್ಟು ಸಾಯುವ ಸಾಧ್ಯತೆ ಇದೆ | ಬಾಹುಬಲಿಯ ರಾಣಾ ದುಗ್ಗುಬಾಟಿ ಹೇಳಿಕೆ | ಅವರ ಆರೋಗ್ಯ ಸ್ಥಿತಿ ಏನು ಗೊತ್ತಾ?
ಬಾಹುಬಲಿಯ ದೈತ್ಯ ವಿಲನ್ ರಾಣಾ ದುಗ್ಗುಬಾಟಿ ಅವರು ತಮ್ಮ ದೈತ್ಯಾಕಾರದ ದೇಹವನ್ನು ಕಳೆದುಕೊಂಡ ಬಳಿಕ, ಇದೀಗ ಟಿವಿ ಶೋವೊಂದರಲ್ಲಿ ತಾನು ಶೇ.30ರಷ್ಟು ಸಾಯುವ ಸಾಧ್ಯತೆ ಇದೆ ಎಂದು ಹೇಳುವ ಮೂಲಕ ಅಭಿಮಾನಿಗಳನ್ನು ಗದ್ಗದಿತರನ್ನಾಗಿಸಿದ್ದಾರೆ.
ನಟಿ ಸಮಂತಾ ಅಕ್ಕಿನೇನಿ ನಡೆಸಿಕೊಡುವ ಸ್ಯಾಮ್ ಜಾಮ್ ಟಾಕ್ಶೋ ನಲ್ಲಿ ದಗ್ಗುಬಾಟಿ ಈ ರೀತಿಯಾಗಿ ಹೇಳಿ ಭಾವುಕರಾಗಿದ್ದಾರೆ.
ಜೀವನವು ವೇಗವಾಗಿ ಓಡುತ್ತಿರುವಾಗ ಕೆಲವು ಬಾರಿ ವಿರಾಮದ ಬಟನ್ ಇರುತ್ತದೆ. ನನಗೆ ಕಿಡ್ನಿ ವೈಫಲ್ಯ ಆಗಿದೆ. ಶೇ. 70 ರಷ್ಟು ಪಾರ್ಶ್ವವಾಯು ಮತ್ತು ರಕ್ತಸ್ರಾವ ಸಂಭವವಿದೆ ಮತ್ತು ಸಾಯುವ ಸಾಧ್ಯತೆ 30 ರಷ್ಟಿದೆ ಎಂದು ಅವರು ಭಾವುಕರಾಗಿದ್ದಾರೆ.
Disclaimer:
www.mahanayaka.in ಅಂತರ್ಜಾಲ ಮಾಧ್ಯಮದಲ್ಲಿ ಪ್ರಕಟವಾದ ಸುದ್ದಿಗಳಲ್ಲಿ ಯಾರದ್ದೇ ಭಾವನೆಗಳಿಗೆ ಧಕ್ಕೆಯಾಗುವಂತಹ ಅಥವಾ ನೋವುಂಟಾಗುವಂತಹ ಅಥವಾ ನಿಮಗೆ ಆಕ್ಷೇಪಾರ್ಹ ಎನಿಸಿದಂತಹ ಅಂಶಗಳ ಬಗ್ಗೆ ಓದುಗರು 9686872149 ನಂಬರ್ ಗೆ ಸುದ್ದಿಯ ಲಿಂಕ್ ಸಹಿತ ನಿಮ್ಮ ದೂರು ಸಲಹೆಗಳನ್ನು ವಾಟ್ಸಾಪ್ ಮಾಡಬಹುದು. ಅಥವಾ ಕರೆ ಮಾಡಬಹುದು. ನಿಮ್ಮ ದೂರನ್ನು ಪರಿಶೀಲಿಸಿ, ಅಂತಹ ಆಕ್ಷೇಪಾರ್ಹ ಅಂಶಗಳನ್ನು ತೆಗೆದು ಹಾಕಲು ಮಾಧ್ಯಮವು ಬದ್ಧವಾಗಿದೆ.