ಸಿದ್ದರಾಮಯ್ಯನವರು ಈಗ ಯಾವ ನಾಯಿಯಾಗಿದ್ದಾರೆ? | ಹೆಚ್. ವಿಶ್ವನಾಥ್ ವಾಗ್ದಾಳಿ - Mahanayaka
7:35 PM Wednesday 20 - August 2025

ಸಿದ್ದರಾಮಯ್ಯನವರು ಈಗ ಯಾವ ನಾಯಿಯಾಗಿದ್ದಾರೆ? | ಹೆಚ್. ವಿಶ್ವನಾಥ್ ವಾಗ್ದಾಳಿ

01/11/2020


Provided by

ಬೆಂಗಳೂರು: ಉಪ ಚುನಾವಣೆಯ ಬಳಿಕ ಬಿಜೆಪಿಗೆ ಸೇರಿದ 17 ಶಾಸಕರ ಪಾಡು, ನಾಯಿ ಪಾಡಾಗುತ್ತದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯನವರು ಹೇಳಿದ್ದರು. ಆದರೆ ಅವರು ಯಾವ ನಾಯಿಯಾಗಿದ್ದಾರೆ ಎಂದು ಎಂದು ವಿಧಾನಪರಿಷತ್ ಸದಸ್ಯ ಹೆಚ್. ವಿಶ್ವನಾಥ್ ಪ್ರಶ್ನಿಸಿದ್ದಾರೆ.

 



 

ಮೈಸೂರಿನಲ್ಲಿಂದು ಮಾತನಾಡಿದ ಹೆಚ್. ವಿಶ್ವನಾಥ್, ಚಾಮುಂಡಿ ಕ್ಷೇತ್ರದಲ್ಲಿ ಸೋತು ಸಿದ್ದರಾಮಯ್ಯನವರು ಯಾವ ನಾಯಿಯಾಗಿದ್ದಾರೆ ಎಂದು ಪ್ರಶ್ನಿಸಿದ್ದರಲ್ಲದೇ, ಬಾದಾಮಿಗೆ ಓಡಿ ಹೋದವರು ಯಾರು? ಎಂದು ಪ್ರಶ್ನಿಸಿದರು.



 

17 ಶಾಸಕರ ಪಾಡು ನಾಯಿಪಾಡಾಗುತ್ತದೆ ಎಂದು ಸಿದ್ದರಾಮಯ್ಯನವರು ಹೇಳಿದ್ದರು. ಆದರೆ ಅವರು ಚಾಮುಂಡಿ ಕ್ಷೇತ್ರದಲ್ಲಿ ಸೋತ ಬಳಿಕ ಅವರು ಯಾವ ನಾಯಿಯಾಗಿದ್ದಾರೆ? ಎಂದು ವಿಶ್ವನಾಥ್ ತಿರುಗೇಟು ನೀಡಿದ್ದಾರೆ.




 

ಇತ್ತೀಚಿನ ಸುದ್ದಿ