ಆನೆಯ ಹಿಂಡಿನೊಂದಿಗೆ ಬಂದ ಮರಿ ಆನೆ ತೋಟದಲ್ಲಿಯೇ ಉಳಿಯಿತು | ಮುಂದೇನಾಯ್ತು ನೋಡಿ - Mahanayaka
2:58 AM Friday 11 - September 2026

ಆನೆಯ ಹಿಂಡಿನೊಂದಿಗೆ ಬಂದ ಮರಿ ಆನೆ ತೋಟದಲ್ಲಿಯೇ ಉಳಿಯಿತು | ಮುಂದೇನಾಯ್ತು ನೋಡಿ

30/10/2020

ಉಜಿರೆ: ಆನೆಗಳ ಹಿಂಡಿನ ಜೊತೆಗೆ ಆಹಾರ ಸೇವಿಸಲು ಬಂದಿದ್ದ ಮರಿಯಾನೆ ಗುಂಪಿನಿಂದ ತಪ್ಪಿ ತೋಟದಲ್ಲಿಯೇ ಉಳಿದ ಘಟನೆ ಬೆಳ್ತಂಗಡಿ ತಾಲ್ಲೂಕಿನ ಕಡಿರುದ್ಯಾವರ ಗ್ರಾಮದಲ್ಲಿ ನಡೆದಿದೆ.



ಈ ಗ್ರಾಮದ ನಿವಾಸಿ ಡೀಕಯ್ಯ ಗೌಡ ಅವರ ತೋಟಕ್ಕೆ ನುಗ್ಗಿದ್ದ ಆನೆಗಳ ಹಿಂಡು ರಾತ್ರಿ ಕೃಷಿಯನ್ನು ಹಾನಿ ಮಾಡಿದೆ.. ಆ ಬಳಿಕ ಆನೆಗಳು ಮರಳಿ ಹೋಗಿವೆ. ಈ ಸಂದರ್ಭದಲ್ಲಿ ಮರಿಯಾನೆಯೊಂದು ಇಲ್ಲಿಯೇ ಉಳಿದಿದೆ.


ತೋಟದ ಮಾಲಿಕ ತೋಟಕ್ಕೆ ಹೋದ ಸಂದರ್ಭದಲ್ಲಿ ಈ ವಿಚಾರ ಬೆಳಕಿಗೆ ಬಂದಿದೆ ಅವರು ತಕ್ಷಣವೇ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಅರಣ್ಯ ಇಲಾಖೆಯ ಅಧಿಕಾರಿ ತ್ಯಾಗರಾಜ್ ಮತ್ತು ಸಿಬ್ಬಂದಿ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ.


ಸುಮಾರು 2 ತಿಂಗಳು ಪ್ರಾಯದ ಮರಿ ಆನೆ ಇದಾಗಿದೆ. ಇದು ಇಲ್ಲಿಯೇ ಬಾಕಿಯಾಗಿರುವ ಹಿನ್ನೆಲೆಯಲ್ಲಿ ಆನೆಗಳ ಹಿಂಡು ಮತ್ತೆ ಬರುವ ಸಾಧ್ಯತೆಗಳಿವೆ ಎಂದು ಅಧಿಕಾರಿಗಳು ಹೇಳಿದ್ದು, ಗ್ರಾಮಸ್ಥರು ಎಚ್ಚರಿಕೆಯಿಂದಿರುವಂತೆ ಸೂಚಿಸಿದ್ದಾರೆ.


ಇತ್ತೀಚಿನ ಸುದ್ದಿ

mobil chat sitesi Ucuz Uçak Bileti deneme bonusu veren siteler deneme bonusu veren siteler