ಉತ್ತರಾಖಂಡ್ ನಲ್ಲಿ ಹಿಮಪಾತ: 33 ಕಾರ್ಮಿಕರ ರಕ್ಷಣೆ - Mahanayaka
10:36 AM Wednesday 11 - March 2026

ಉತ್ತರಾಖಂಡ್ ನಲ್ಲಿ ಹಿಮಪಾತ: 33 ಕಾರ್ಮಿಕರ ರಕ್ಷಣೆ

01/03/2025

ಉತ್ತರಾಖಂಡದ ಚಮೋಲಿ ಜಿಲ್ಲೆಯ ಎತ್ತರದ ಗ್ರಾಮವಾದ ಮಾನಾದಲ್ಲಿ ಹಿಮಪಾತದ ಅಡಿಯಲ್ಲಿ ಸಿಲುಕಿದ್ದ ಒಟ್ಟು 55 ಬಿಆರ್ ಓ ಕಾರ್ಮಿಕರಲ್ಲಿ 33 ಜನರನ್ನು ರಕ್ಷಿಸಲಾಗಿದೆ.

ಉಳಿದ 22 ಜನರ ಸುರಕ್ಷತೆಯ ಬಗ್ಗೆ ಇನ್ನೂ ಆತಂಕವಿದೆ.
ರಕ್ಷಣಾ ಕಾರ್ಯಾಚರಣೆಯ ಬಗ್ಗೆ ಮಾಹಿತಿ ನವೀಕರಿಸಿದ ಉತ್ತರಾಖಂಡದ ವಿಪತ್ತು ನಿರ್ವಹಣಾ ಕಾರ್ಯದರ್ಶಿ ವಿನೋದ್ ಕುಮಾರ್ ಸುಮನ್, ಸಿಕ್ಕಿಬಿದ್ದ 33 ಕಾರ್ಮಿಕರನ್ನು ರಕ್ಷಿಸಲಾಗಿದೆ. ಪ್ರತಿಕೂಲ ಹವಾಮಾನ ಪರಿಸ್ಥಿತಿಗಳ ನಡುವೆ 22 ಜನರನ್ನು ಪತ್ತೆಹಚ್ಚಬೇಕಾಗಿದೆ ಎಂದು ಹೇಳಿದ್ದಾರೆ.

ಬಾರ್ಡರ್ ರೋಡ್ಸ್ ಆರ್ಗನೈಸೇಶನ್ (ಬಿಆರ್ ಓ) ಶಿಬಿರದಲ್ಲಿ ಹಿಮಪಾತದಲ್ಲಿ ಸಿಲುಕಿರುವ 57 ಕಾರ್ಮಿಕರಲ್ಲಿ ಇಬ್ಬರು ರಜೆಯಲ್ಲಿದ್ದರು ಮತ್ತು ಸಿಕ್ಕಿಬಿದ್ದ ಕಾರ್ಮಿಕರ ನಿಜವಾದ ಸಂಖ್ಯೆ 55 ಎಂದು ನಂತರ ತಿಳಿದುಬಂದಿದೆ ಎಂದು ಸುಮನ್ ಹೇಳಿದ್ದಾರೆ.

ಇವರಲ್ಲಿ 33 ಜನರನ್ನು ರಕ್ಷಿಸಲಾಗಿದ್ದು, 22 ಜನರನ್ನು ಇನ್ನೂ ಪತ್ತೆಹಚ್ಚಬೇಕಾಗಿದೆ ಎಂದು ಅವರು ಹೇಳಿದ್ದಾರೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ