ಮಳೆ ಬರ್ತಿದೆ ನಿಧಾನವಾಗಿ ಸಂಚರಿಸಿ: ಹೇಮಾವತಿ ಉಪನದಿ ಕಾಲುವೆಗೆ ಬಿದ್ದ ಕಾರು - Mahanayaka

ಮಳೆ ಬರ್ತಿದೆ ನಿಧಾನವಾಗಿ ಸಂಚರಿಸಿ: ಹೇಮಾವತಿ ಉಪನದಿ ಕಾಲುವೆಗೆ ಬಿದ್ದ ಕಾರು

car accident
25/05/2025

ಚಿಕ್ಕಮಗಳೂರು:  ಮಲೆನಾಡಲ್ಲಿ ಭಾರೀ ಗಾಳಿ–ಮಳೆ ಅಬ್ಬರ ಮುಂದುವರಿದಿದೆ. ಭಾರೀ ಮಳೆ ಹಿನ್ನೆಲೆ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಹೇಮಾವತಿ ಉಪನದಿ ಕಾಲುವೆಗೆ ಬಿದ್ದ ಘಟನೆ ನಡೆದಿದೆ.

ಮೂಡಿಗೆರೆ ತಾಲೂಕಿನ ರಾ.ಹೆ.173ರ ಬಣಕಲ್ ಬಳಿ ಈ ಘಟನೆ ನಡೆದಿದೆ. ರಾ.ಹೆ.ಯಲ್ಲಿ ರಸ್ತೆ ಮಧ್ಯೆ ನೀರು ನಿಲ್ಲುತ್ತಿದ್ದು, ವಾಹನಗಳು ನೀರಿನ ಮೇಲೆ ಹೋಗುತ್ತಿದ್ದಂತೆ ವಾಹನಗಳು ಅಪಘಾತಕ್ಕೀಡಾಗುತ್ತಿವೆ.

ನಾಲ್ಕು ದಿನದ ಹಿಂದಷ್ಟೆ ಇದೇ ರೀತಿ ಕಾರು–ಬಸ್ ಕೂಡ ಅಪಘಾತಕ್ಕೀಡಾಗಿದ್ದವು. ಸದ್ಯ ಅದೃಷ್ಟವಶಾತ್ ಕಾರಿನಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಘಟನೆ ಸಂಬಂಧ  ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಬಣಕಲ್‌‌ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ