ಬೈಕ್ ಮೇಲೆ ಬಸ್ ಹತ್ತಿಸಿ ಪರಾರಿಯಾದ ಬಸ್ ಚಾಲಕ: ಬೈಕ್ ಸವಾರ ಸಾವು - Mahanayaka

ಬೈಕ್ ಮೇಲೆ ಬಸ್ ಹತ್ತಿಸಿ ಪರಾರಿಯಾದ ಬಸ್ ಚಾಲಕ: ಬೈಕ್ ಸವಾರ ಸಾವು

anekkal
05/04/2024

ಬೆಂಗಳೂರು:  ಬೈಕ್ ಮೇಲೆ ಬಸ್ ಹತ್ತಿಸಿದ ಚಾಲಕ ಬಸ್ ಸಹಿತವಾಗಿ ಪರಾರಿಯಾಗಿರುವ ಘಟನೆ ಆನೇಕಲ್‌ ನ ಮಿರ್ಜಾ ರಸ್ತೆಯ ಪೊಲೀಸ್ ಕ್ವಾಟ್ರಸ್ ಮುಂಭಾಗದಲ್ಲಿ ನಡೆದಿದೆ.


Provided by

ಘಟನೆಯಲ್ಲಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಈತನ ಗುರುತು ಇನ್ನೂ ಪತ್ತೆಹಚ್ಚಲಾಗಿಲ್ಲ.

ಇಂದು ಬೆಳಗ್ಗೆ 6.30ರ ಸುಮಾರಿಗೆ ಭೀಕರ ಅಪಘಾತ ನಡೆದಿದ್ದು, ಮಿರ್ಜಾ ರಸ್ತೆಯ ವೆಂಕಟೇಶ್ವರ ಸರ್ಕಲ್‌ನಿಂದ ರಾಘವೇಂದ್ರ ಭವನ ಸರ್ಕಲ್ ಮಾರ್ಗವಾಗಿ ಹೋಗುವಾಗ ಈ ಘಟನೆ ನಡೆದಿದೆ.

ಬಸ್ ಬೈಕ್ ಮೇಲೆ ಹತ್ತಿದ ಪರಿಣಾಮ ಬೈಕ್ ಸವಾರನ ತಲೆಯ ಮೇಲೆಯೇ ಬಸ್ ಹರಿದಿದೆ. ಪರಿಣಾಮವಾಗಿ ತಲೆ ಛಿದ್ರಛಿದ್ರವಾಗಿದ್ದು, ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ಆನೇಕಲ್‌ ನ ಮಿರ್ಜಾ ರಸ್ತೆಯಲ್ಲಿ ಕಳೆದ ಮೂರ್ನಾಲ್ಕು ದಿನಗಳ ಹಿಂದೆ ಅರಣ್ಯ ಇಲಾಖೆ ಸಿಬ್ಬಂದಿ ಸಾವನ್ನಪ್ಪಿದ್ದರು. ಇದೀಗ ಮತ್ತೊಂದು ಘಟನೆ ನಡೆದಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ