ಕಿವುಡ-ಮೂಗಿ ಅಪ್ರಾಪ್ತೆಯ ಅತ್ಯಾಚಾರ-ಕೊಲೆ ಪ್ರಕರಣ: ಕುಂಭಮೇಳದಲ್ಲಿ ಸಿಕ್ಕಿಬಿದ್ದ ಆರೋಪಿ - Mahanayaka

ಕಿವುಡ-ಮೂಗಿ ಅಪ್ರಾಪ್ತೆಯ ಅತ್ಯಾಚಾರ-ಕೊಲೆ ಪ್ರಕರಣ: ಕುಂಭಮೇಳದಲ್ಲಿ ಸಿಕ್ಕಿಬಿದ್ದ ಆರೋಪಿ

20/02/2025

ಕಳೆದ 22 ವರ್ಷಗಳಿಂದ ಇಬ್ಬರು ಯುವತಿಯರ ಮೇಲೆ ಅತ್ಯಾಚಾರ ಎಸಗಿದ ಆರೋಪ ಹೊತ್ತಿರುವ ವ್ಯಕ್ತಿಯೊಬ್ಬ 11 ವರ್ಷದ ಕಿವುಡ ಮತ್ತು ಮೂಕ ಅನಾಥ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿರುವ ಘಟನೆ ಮಧ್ಯಪ್ರದೇಶದ ರಾಜ್‌ಗಢ್ ಜಿಲ್ಲೆಯಲ್ಲಿ ನಡೆದಿದೆ‌.


Provided by

ಸಂತ್ರಸ್ತೆ ಫೆಬ್ರವರಿ 1 ರ ರಾತ್ರಿ ತನ್ನ ಮನೆಯಿಂದ ನಾಪತ್ತೆಯಾಗಿದ್ದಳು. ಬಳಿಕ ಹತ್ತಿರದ ಕಾಡಿನಲ್ಲಿ ತೀವ್ರವಾಗಿ ಗಾಯಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು. ಆರು ದಿನಗಳ ಚಿಕಿತ್ಸೆಯ ನಂತರ ಫೆಬ್ರವರಿ 8 ರಂದು ಭೋಪಾಲ್ ಆಸ್ಪತ್ರೆಯಲ್ಲಿ ಆಕೆ ಸಾವನ್ನಪ್ಪಿದ್ದಾಳೆ. ಆಕೆಯ ಮೇಲೆ ಅತ್ಯಾಚಾರ ನಡೆದಿದೆ ಮತ್ತು ಆಕೆಯ ಖಾಸಗಿ ಭಾಗಗಳಿಗೆ ತೀವ್ರ ಗಾಯಗಳಾಗಿವೆ ಎಂದು ವೈದ್ಯರು ದೃಢಪಡಿಸಿದ್ದಾರೆ.
ಇತ್ತೀಚಿನ ದಾಳಿಯ ನಂತರ, ಪೊಲೀಸರು ಒಂಬತ್ತು ಜಿಲ್ಲೆಗಳು ಮತ್ತು ಹಲವಾರು ರೈಲ್ವೆ ನಿಲ್ದಾಣಗಳಲ್ಲಿ ವ್ಯಾಪಕ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿ ಆರೋಪಿ ರಮೇಶ್ ಖತಿಯನ್ನು ಬಂಧಿಸಲಾಗಿದೆ.

ನರಸಿಂಗರ್ ಬಸ್ ನಿಲ್ದಾಣದಲ್ಲಿ ಕೆಂಪು ಶಾಲು ಮತ್ತು ನೀಲಿ-ಕಪ್ಪು ಸ್ಪೋರ್ಟ್ಸ್ ಶೂಗಳನ್ನು ಧರಿಸಿದ ಶಂಕಿತನನ್ನು ಗುರುತಿಸಿದಾಗ ಪ್ರಮುಖ ಸುಳಿವು ಹೊರಬಂದಿತು. ಘಟನೆ ನಡೆದ ದಿನ ಸಂಜೆ 6 ಗಂಟೆ ಸುಮಾರಿಗೆ ಕುರಾವರ್ ಬಸ್ ನಿಲ್ದಾಣದಿಂದ ಶಂಕಿತ ವ್ಯಕ್ತಿ ಬಂದಿದ್ದಾನೆ ಎಂದು ಆಟೋರಿಕ್ಷಾ ಚಾಲಕ ದೃಢಪಡಿಸಿದ್ದಾರೆ. ಹೀಗಾಗಿ ಪೊಲೀಸರು ಶಂಕಿತನ ಮನೆ ಇರುವ ಅಕೋಡಿಯಾಗೆ ಹೋಗಿದ್ದಾರೆ. ಆಗ ಆರೋಪಿಯು ಕುಂಭಮೇಳಕ್ಕೆ ಹೋಗಿದ್ದರು ಎಂದು ಅವರಿಗೆ ತಿಳಿಯಿತು.


Provided by

ಆರು ದಿನಗಳ ಕಾಲ, ಉಜ್ಜಯಿನಿ, ಶಾಜಾಪುರ, ರತ್ಲಾಮ್ ಮತ್ತು 17 ರೈಲ್ವೆ ನಿಲ್ದಾಣಗಳು ಸೇರಿದಂತೆ ವಿವಿಧ ಸ್ಥಳಗಳಲ್ಲಿ ದಾಳಿ ನಡೆಸಲಾಯಿತು. ಸಿಸಿಟಿವಿ ದೃಶ್ಯಾವಳಿಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಲಾಯಿತು ಮತ್ತು ಶಂಕಿತನನ್ನು ಪ್ರಯಾಗ್ ರಾಜ್ ರೈಲ್ವೆ ನಿಲ್ದಾಣದಲ್ಲಿ ಗುರುತಿಸಲಾಯಿತು.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ