ಅಜ್ಞಾನದ ಮೇಲೆ ಜ್ಞಾನದ ವಿಜಯವನ್ನು ಆಚರಿಸುವ ಹಬ್ಬ ದೀಪಾವಳಿ | ಪಿಎಸ್ ಐ ಮೇಟಿ
ಚನ್ನಗಿರಿ: ಸಂತೇಬೆನ್ನೂರು ಪೊಲೀಸ್ ಠಾಣೆಯಲ್ಲಿ ಎಲ್ಲಾ ಪೊಲೀಸ್ ಸಿಬ್ಬಂದಿ ವರ್ಗದವರೊಂದಿಗೆ ಈ ಬಾರಿ ಪೋಲಿಸ್ ಠಾಣೆಯಲ್ಲಿ ಬೆಳಕಿನ ಹಬ್ಬ ದೀಪಾವಳಿ ಹಬ್ಬವನ್ನು ಠಾಣೆಯ ಪಿಎಸ್ ಐ ಶಿವರುದ್ರಪ್ಪ ಎಸ್. ಮೇಟಿ ರವರು ಎಲ್ಲಾ ಪೊಲೀಸ್ ಸಿಬ್ಬಂದಿಗಳಿಗೆ ಸಿಹಿಯನ್ನು ಹಂಚಿ ದೀಪಾವಳಿ ಆಚರಿಸಲಾಯಿತು.
ಈ ಹಬ್ಬವು ಕತ್ತಲಿನ ಮೇಲೆ ಬೆಳಕಿನ ವಿಜಯವನ್ನು ಮತ್ತು ಅಜ್ಞಾನದ ಮೇಲೆ ಜ್ಞಾನದ ವಿಜಯವನ್ನು ಆಚರಿಸುವ ದೀಪಾವಳಿ ಹಬ್ಬವಾಗಿದೆ ಎಂದು ಅವರು ಇದೇ ಸಂದರ್ಭದಲ್ಲಿ ಹೇಳಿದರು.
ಕಳೆದ ವರ್ಷ ಎಲ್ಲಾ ಯುವಕರು ಪಟಾಕಿಯನ್ನು ಸಿಡಿಸಿ ಸಂಭ್ರಮದಿಂದ ಆಚರಿಸುತಿದ್ದರು . ಈ ಪಟಾಕಿಯಿಂದಾಗಿ ಸಾಕಷ್ಟು ಜನ ಯುವಕರು ತೊಂದರೆಗಳನ್ನು ಅನುಭವಿಸಿರುವುದನ್ನು ನೋಡಿದ್ದೇವೆ . ಈ ವರ್ಷ ಕೊರೋನ ಮಹಾಮಾರಿ ರೋಗವು ದೇಶದೆಲ್ಲೆಡೆ ಆವರಿಸಿ ಮನುಕುಲವೆ ನಲುಗಿ ಹೋಗಿದೆ ಹಾಗಾಗಿ ಈ ಭಾರಿ ಪಟಾಕಿಯ ಹೊಗೆಯಿಂದಲೂ ಕೂಡ ನಾನ ರೀತಿಯ ರೋಗವು ಬರಬಹುದಾಗಿದೆ ಎಂದು ರಾಜ್ಯ ಸರ್ಕಾರ ಪಟಾಕಿಯನ್ನು ನಿಷೇದಿಸಲಾಗಿದೆ . ಹಸಿರು ಪಟಾಕಿಯನ್ನು ಹಾರಿಸುವ ಮೂಲಕ ಮಕ್ಕಳು ಯುವಕರು ದೀಪಾವಳಿ ಹಬ್ಬವನ್ನು ಆಚರಿಬೇಕು ಎಂದರು ಎಂದು ಅವರು ತಿಳಿಸಿದರು.
Disclaimer:
www.mahanayaka.in ಅಂತರ್ಜಾಲ ಮಾಧ್ಯಮದಲ್ಲಿ ಪ್ರಕಟವಾದ ಸುದ್ದಿಗಳಲ್ಲಿ ಯಾರದ್ದೇ ಭಾವನೆಗಳಿಗೆ ಧಕ್ಕೆಯಾಗುವಂತಹ ಅಥವಾ ನೋವುಂಟಾಗುವಂತಹ ಅಥವಾ ನಿಮಗೆ ಆಕ್ಷೇಪಾರ್ಹ ಎನಿಸಿದಂತಹ ಅಂಶಗಳ ಬಗ್ಗೆ ಓದುಗರು 9686872149 ನಂಬರ್ ಗೆ ಸುದ್ದಿಯ ಲಿಂಕ್ ಸಹಿತ ನಿಮ್ಮ ದೂರು ಸಲಹೆಗಳನ್ನು ವಾಟ್ಸಾಪ್ ಮಾಡಬಹುದು. ಅಥವಾ ಕರೆ ಮಾಡಬಹುದು. ನಿಮ್ಮ ದೂರನ್ನು ಪರಿಶೀಲಿಸಿ, ಅಂತಹ ಆಕ್ಷೇಪಾರ್ಹ ಅಂಶಗಳನ್ನು ತೆಗೆದು ಹಾಕಲು ಮಾಧ್ಯಮವು ಬದ್ಧವಾಗಿದೆ.