ದೇಗುಲ ಧ್ವಂಸ ಪ್ರಕರಣ: ಆರೋಪಿ ಅರೆಸ್ಟ್; ರಾಜಕೀಯ ಆಯಾಮವಿಲ್ಲ ಎಂದ ಪೊಲೀಸರು - Mahanayaka
5:56 PM Friday 11 - September 2026

ದೇಗುಲ ಧ್ವಂಸ ಪ್ರಕರಣ: ಆರೋಪಿ ಅರೆಸ್ಟ್; ರಾಜಕೀಯ ಆಯಾಮವಿಲ್ಲ ಎಂದ ಪೊಲೀಸರು

09/07/2024

ವಾಮಾಚಾರ ನಡೆಸಲಾಗುತ್ತಿದೆ ಎಂಬ ಶಂಕೆಯಿಂದ ವ್ಯಕ್ತಿಯೊಬ್ಬ ದೇವಾಲಯವನ್ನು ಧ್ವಂಸಗೊಳಿಸಿರುವ ಘಟನೆ ಜಮ್ಮುವಿನ ನಗ್ರೋತಾದ ನಾರಾಯಣ್ ಖೂ ಪ್ರದೇಶದಲ್ಲಿ ನಡೆದಿದೆ ಎಂದು ವರದಿಯಾಗಿದೆ. ಘಟನೆ ನಡೆದ ಬೆನ್ನಿಗೇ ಪೊಲೀಸರು ಅರ್ಜುನ್ ಶರ್ಮ ಎಂಬ ವ್ಯಕ್ತಿಯನ್ನು ಬಂಧಿಸಿದ್ದಾರೆ. ಈ ಘಟನೆಗೆ ಯಾವುದೇ ರಾಜಕೀಯ ಆಯಾಮವಿಲ್ಲ ಎಂದು ಪೊಲೀಸರು ಸ್ಪಷ್ಟನೆ ನೀಡಿದ್ದಾರೆ.

ಅಲ್ಲಿ ವಾಮಾಚಾರ ನಡೆಯುತ್ತಿದೆ ಎಂಬ ಶಂಕೆಯಿಂದ ಅರ್ಜುನ್ ಶರ್ಮ ಶನಿವಾರ ನಗ್ರೋತಾದಲ್ಲಿರುವ ದೇವಾಲಯಕ್ಕೆ ಬೆಂಕಿ ಹಚ್ಚಿ, ಗರ್ಭಗುಡಿಯನ್ನು ಧ್ವಂಸಗೊಳಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಯನ್ನು ಬಂಧಿಸಿದ ಆರಂಭದಲ್ಲಿ ಪೊಲೀಸರು ಆತನ ಗುರುತನ್ನು ಬಹಿರಂಗ ಪಡಿಸಿರಲಿಲ್ಲ. ಹೀಗಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಬಲಪಂಥೀಯರು ಈ ಕೃತ್ಯಕ್ಕೆ ಕೋಮು ಆಯಾಮ ನೀಡಿದ್ದರು. ಆದರೆ, ಅಂತಿಮವಾಗಿ ಪೊಲೀಸರು ಆರೋಪಿಯ ಗುರುತನ್ನು ಬಹಿರಂಗಪಡಿಸಿದ್ದಾರೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ

mobil chat sitesi Ucuz Uçak Bileti deneme bonusu veren siteler