ಕೇಸರಿ ಪಡೆ ಮತ್ತು ಆರೆಸ್ಸೆಸ್ ನಡುವೆ ಹಗ್ಗಜಗ್ಗಾಟ: ಬಿಜೆಪಿಯು ಚುಕ್ಕಾಣಿ ಯಾರ ಕೈಗೆ..? - Mahanayaka
6:19 PM Friday 11 - September 2026

ಕೇಸರಿ ಪಡೆ ಮತ್ತು ಆರೆಸ್ಸೆಸ್ ನಡುವೆ ಹಗ್ಗಜಗ್ಗಾಟ: ಬಿಜೆಪಿಯು ಚುಕ್ಕಾಣಿ ಯಾರ ಕೈಗೆ..?

13/08/2024

ಬಿಜೆಪಿ ಮತ್ತು ಆರೆಸ್ಸೆಸ್ ನಡುವೆ ಹಗ್ಗ ಜಗ್ಗಾಟ ಆರಂಭವಾಗಿದೆ. ಬಿಜೆಪಿಯ ಮುಂದಿನ ಅಧ್ಯಕ್ಷ ಯಾರಾಗಲಿದ್ದಾರೆ ಎಂಬ ವಿಷಯದಲ್ಲಿ ಬಿಜೆಪಿಯು ಕಾಲಹರಣ ಮಾಡುತ್ತಿದ್ದರೆ, ತನ್ನೊಂದಿಗೆ ಸಮಾಲೋಚನೆಯ ಬಳಿಕವೇ ಪಕ್ಷದ ಮುಂದಿನ ಅಧ್ಯಕ್ಷರನ್ನು ಆಯ್ಕ ಮಾಡಬೇಕು ಎಂಬ ಸ್ಪಷ್ಟ ನಿಲುವನ್ನು ಆರೆಸ್ಸೆಸ್ ಹೊಂದಿದೆ.

ರವಿವಾರ ಸಂಜೆ ದೆಹಲಿಯಲ್ಲಿ ರಕ್ಷಣಾ ಸಚಿವ ರಾಜನಾಥ ಸಿಂಗ್ ರ ನಿವಾಸದಲ್ಲಿ ಐದು ಗಂಟೆಗಳ ಕಾಲ ನಡೆದ ಸುದೀರ್ಘ ಸಭೆಯಲ್ಲಿ ಕೇಂದ್ರ ಗೃಹಸಚಿವ ಅಮಿತ್ ಶಾ, ಆರೋಗ್ಯ ಸಚಿವ ಹಾಗೂ ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ರೊಂದಿಗೆ ಹಿರಿಯ ಆರೆಸ್ಸೆಸ್ ನಾಯಕ ದತ್ತಾತ್ರೇಯ ಹೊಸಬಾಳೆ ಮತ್ತು ಅದರ ಜಂಟಿ ಪ್ರಧಾನ ಕಾರ್ಯದರ್ಶಿ ಅರುಣ್ ಕುಮಾರ್ ಉಪಸ್ಥಿತರಿದ್ದರು.

ಉನ್ನತ ಮೂಲಗಳ ಪ್ರಕಾರ ಸಭೆಯಲ್ಲಿ ಬಿಜೆಪಿಯ ಮುಂದಿನ ಅಧ್ಯಕ್ಷರು ಯಾರಾಗಬೇಕು ಎನ್ನುವುದರ ಮತ್ತು ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದುಗಳ ಸುರಕ್ಷತೆ ಕುರಿತು ಚರ್ಚಿಸಲಾಗಿದೆ.

ಮುಂದಿನ ಬಿಜೆಪಿ ಅಧ್ಯಕ್ಷರ ಕುರಿತು ಎರಡು ಚಿಂತನೆಗಳಿವೆ. ಹುದ್ದೆಗೆ ಕಾರ್ಯಾಧ್ಯಕ್ಷರನ್ನು ಶೀಘ್ರ ಹೆಸರಿಸಬೇಕು ಎನ್ನುವುದು ಒಂದು ಚಿಂತನೆಯಾಗಿದ್ದರೆ, ಮಹಾರಾಷ್ಟ್ರ, ಹರ್ಯಾಣ ಮತ್ತು ಜಾರ್ಖಂಡ್ ವಿಧಾನಸಭಾ ಚುನಾವಣೆಗಳು ಮುಗಿದ ಬಳಿಕವೇ ಹೊಸ ಕಾರ್ಯಾಧ್ಯಕ್ಷರ ಹೆಸರನ್ನು ಪ್ರಕಟಿಸಬೇಕು ಎನ್ನುವುದು ಇನ್ನೊಂದು ಚಿಂತನೆಯಾಗಿದೆ ಎಂದು thehindu.com ವರದಿ ಮಾಡಿದೆ.

‘ಸಮನ್ವಯ’ಕ್ಕಾಗಿ ಆರೆಸ್ಸೆಸ್ ಆಗಾಗ್ಗೆ ಸಭೆ ನಡೆಸುತ್ತಿರುವುದು ಹಿಂದಿಗಿಂತ ಭಿನ್ನವಾಗಿ ಬಿಜೆಪಿಯನ್ನು ನಡೆಸುವಲ್ಲಿ ಸಕ್ರಿಯ ಪಾತ್ರವನ್ನು ಬಯಸಿದೆ ಎನ್ನುವುದರ ಸಂಕೇತವಾಗಿದೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ

mobil chat sitesi Ucuz Uçak Bileti deneme bonusu veren siteler