ಆರೋಪಿ ಗೋಸ್ವಾಮಿಯ ಬಂಧನ ಖಂಡಿಸಿ ಪ್ರತಿಭಟನೆ | ಬಿಜೆಪಿ ನಾಯಕರ ಬಂಧನ - Mahanayaka

ಆರೋಪಿ ಗೋಸ್ವಾಮಿಯ ಬಂಧನ ಖಂಡಿಸಿ ಪ್ರತಿಭಟನೆ | ಬಿಜೆಪಿ ನಾಯಕರ ಬಂಧನ

08/11/2020

ನವದೆಹಲಿ: ಇಂಟೀರಿಯರ್ ಡಿಸೈನರ್ ಆತ್ಮಹತ್ಯೆಗೆ ಪ್ರೇರಣೆ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಲಪಂಥೀಯ ಪತ್ರಕರ್ತರ,  ರಿಪಬ್ಲಿಕ್ ಟಿವಿ ಪ್ರಧಾನ ಸಂಪಾದಕ ಅರ್ನಾಬ್ ಗೋಸ್ವಾಮಿಯನ್ನು ಬಂಧಿಸಿದ್ದರ ವಿರುದ್ಧ ಪ್ರತಿಭಟಿಸಿದ ಬಿಜೆಪಿ ಮುಖಂಡರನ್ನು  ಪೊಲೀಸರು ಬಂಧಿಸಿದ್ದಾರೆ.


Provided by

 ದೆಹಲಿಯ ರಾಜ್‌ಘಾಟ್‌ನ ಸಮೀಪ ರಾಜ್‌ಘಾಟ್‌ನಲ್ಲಿರುವ ಮಹಾತ್ಮ ಗಾಂಧಿ ಸ್ಮಾರಕದ ಸಮೀಪ ಬಿಜೆಪಿ ಮುಖಂಡ  ಕಪಿಲ್ ಮಿಶ್ರಾ ಮತ್ತು ತಾಜಿಂದರ್ ಬಗ್ಗಾ ಆರೋಪಿ ಅರ್ನಾಬ್ ರನ್ನು ಸಮರ್ಥಿಸಿ ಧರಣಿ ನಡೆಸಲು ಪ್ರಯತ್ನಿಸುತ್ತಿದ್ದರು. ಈ ವೇಳೆ ಪೊಲೀಸರು ಅವರನ್ನು ಬಂಧಿಸಿದ್ದಾರೆ.

2018ರಲ್ಲಿ ಇಂಟೀರಿಯರ್ ಡಿಸೈನರ್ ಅನ್ವಯ್ ನಾಯಕ್ ಅವರ ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದ ಆರೋಪದ ಮೇಲೆ ಅರ್ನಬ್‌ ಗೋಸ್ವಾಮಿಯನ್ನು  ಕಳೆದ ವಾರ ಬಂಧಿಸಲಾಗಿದೆ. ಆತನಿಗೆ ನವೆಂಬರ್ 18ರವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಇತ್ತೀಚಿನ ಸುದ್ದಿ