ರೈತರ ಹೋರಾಟಕ್ಕೆ ಭಾರತೀಯ ವಿದ್ಯಾರ್ಥಿ ಸಂಘ ಬೆಂಬಲ
ಬೆಂಗಳೂರು: ಕರಾಳ ಕೃಷಿ ಕಾನೂನಿನ ವಿರುದ್ಧ ಇಂದು ರೈತರು ಭಾರತ್ ಬಂದ್ ನಡೆಸುತ್ತಿದ್ದು, ಈ ರೈತರ ಹೋರಾಟಕ್ಕೆ ಭಾರತೀಯ ವಿದ್ಯಾರ್ಥಿ ಸಂಘ(BVS) ಬೆಂಬಲ ಸೂಚಿಸಿದೆ.
ರೈತರು ಕರೆನೀಡಿರುವ ‘ಭಾರತ್ ಬಂದ್’ಗೆ ಭಾರತೀಯ ವಿದ್ಯಾರ್ಥಿ ಸಂಘ ( BVS) ಕರ್ನಾಟಕ, ಸಂಪೂರ್ಣವಾಗಿ ಬೆಂಬಲ ಘೋಷಿಸಿದೆ. ಬನ್ನಿ, ನಾವೆಲ್ಲರೂ ಅನ್ನದಾತರ ಜೊತೆ ನಿಲ್ಲೋಣ ಎಂದು ಭಾರತೀಯ ವಿದ್ಯಾರ್ಥಿ ಸಂಘವು ತನ್ನ ಅಧಿಕೃತ ಫೇಸ್ ಬುಕ್ ಪುಟ ‘ಬಿವಿಎಸ್ ಕರ್ನಾಟಕ’ದಲ್ಲಿ ಕರೆ ನೀಡಿದೆ.
ರೈತ ಉಳಿದರೆ ದೇಶ ಉಳಿಯುತ್ತದೆ. ರೈತರನ್ನು ಉಳಿಸೋಣ, ಅವರೊಂದಿಗೆ ನಿಲ್ಲೋಣ ಭಾರತ್ ಬಂದ್ ಯಶಸ್ವಿಗೊಳಿಸೋಣ ಎಂದು ಬಿವಿಎಸ್ ಕರೆ ನೀಡಿದೆ.
ರೈತ ಉಳಿದರೆ ದೇಶ ಉಳಿದೀತು..,
ಬನ್ನಿ ರೈತರ ಉಳಿಸೋಣ, ಅವರೊಂದಿಗೆ ನಿಲ್ಲೋಣ
ಭಾರತ್ ಬಂದ್ ಯಶಸ್ವಿಗೊಳಿಸೋಣ..,
#BVS_Karnataka
#BharatBandh
#BVS_StandsWithFarmersPosted by BVS Karnataka on Monday, 7 December 2020
Disclaimer:
www.mahanayaka.in ಅಂತರ್ಜಾಲ ಮಾಧ್ಯಮದಲ್ಲಿ ಪ್ರಕಟವಾದ ಸುದ್ದಿಗಳಲ್ಲಿ ಯಾರದ್ದೇ ಭಾವನೆಗಳಿಗೆ ಧಕ್ಕೆಯಾಗುವಂತಹ ಅಥವಾ ನೋವುಂಟಾಗುವಂತಹ ಅಥವಾ ನಿಮಗೆ ಆಕ್ಷೇಪಾರ್ಹ ಎನಿಸಿದಂತಹ ಅಂಶಗಳ ಬಗ್ಗೆ ಓದುಗರು 9686872149 ನಂಬರ್ ಗೆ ಸುದ್ದಿಯ ಲಿಂಕ್ ಸಹಿತ ನಿಮ್ಮ ದೂರು ಸಲಹೆಗಳನ್ನು ವಾಟ್ಸಾಪ್ ಮಾಡಬಹುದು. ಅಥವಾ ಕರೆ ಮಾಡಬಹುದು. ನಿಮ್ಮ ದೂರನ್ನು ಪರಿಶೀಲಿಸಿ, ಅಂತಹ ಆಕ್ಷೇಪಾರ್ಹ ಅಂಶಗಳನ್ನು ತೆಗೆದು ಹಾಕಲು ಮಾಧ್ಯಮವು ಬದ್ಧವಾಗಿದೆ.