ಚಾರ್ಮಾಡಿ ಘಾಟಿಯಲ್ಲಿ ದಟ್ಟ ಮಂಜು -– ಪ್ರಯಾಣಿಕರಿಗೆ ಎಚ್ಚರಿಕೆ!
ಚಿಕ್ಕಮಗಳೂರು: ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟಿ ರಸ್ತೆಯಲ್ಲಿ ದಟ್ಟ ಮಂಜು ಕವಿದಿದ್ದು, ವಾಹನ ಸವಾರರಿಗೆ ತೀವ್ರ ತೊಂದರೆ ಉಂಟಾಗಿದೆ. ರಸ್ತೆಯ ಸ್ಥಿತಿ ಹಗಲು ಕೂಡ ಅಪಾಯಕಾರಿಯಾಗಿದ್ದು, ರಾತ್ರಿ ವೇಳೆ ಮತ್ತಷ್ಟು ಭಯಾನಕವಾಗಿದೆ.
ಚಾರ್ಮಾಡಿ ರಸ್ತೆಯಲ್ಲಿ ಕವಿದಿರುವ ಮಂಜು ಎಷ್ಟು ದಟ್ಟವೆಂದರೆ, ಹೆಡ್ ಲೈಟ್ ಹಾಕಿದರೂ 5 ಅಡಿ ದೂರಕ್ಕೂ ಗೋಚರವಾಗುತ್ತಿಲ್ಲ. ಹಾವು–ಬಳುಕಿನ ಮೈಕಟ್ಟಿನ ರಸ್ತೆ, ತಿರುವುಗಳು, ಗುಡ್ಡ-ಪ್ರಪಾತಗಳ ನಡುವಿನ ಸಂಚಾರ ಅಪಾಯಕ್ಕೆ ಆಹ್ವಾನ ನೀಡುತ್ತಿದೆ.
ತಪ್ಪದೇ ಪಾಲಿಸಿ:
ತಿರುವುಗಳಲ್ಲಿ ಹಾರನ್ ಬಾರಿಸಿ ಸಾಗುವುದು ಉತ್ತಮ.
ಹೆಡ್ ಲೈಟ್ ಕೂಡಲೇ ಸಕ್ರಿಯವಾಗಿ ಇರಲಿ.
ದಿಟ್ಟನಾಗಿ ತಿರುವುಗಳನ್ನು ತೆಗೆದುಕೊಳ್ಳಬೇಡಿ-– ನಿಯಂತ್ರಣ ತಪ್ಪಿದರೆ ವಾಹನ ಉರುಳುವ ಸಾಧ್ಯತೆ.
ಮಂಜು ತುಂಬಿದ ರಸ್ತೆಯಲ್ಲಿ ಪ್ರತ್ಯೇಕವಾಗಿರಬೇಡಿ, ಸಹಚರ ವಾಹನಗಳೊಂದಿಗೆ ಪ್ರಯಾಣಿಸಿ.
ಸಾಧ್ಯವಾದರೆ ರಾತ್ರಿ ಪ್ರಯಾಣ ತಪ್ಪಿಸಿ.
ಸ್ಥಳೀಯರ ಎಚ್ಚರಿಕೆ: “ಮಂಜು ಇಷ್ಟಷ್ಟು ಅಲ್ಲ. ಹಗಲಲ್ಲೇ ಮುಂದೆ ಎಷ್ಟು ದೂರ ಇದೆ ಅಂತ ಗೊತ್ತಾಗಲ್ಲ. ಹೆಡ್ ಲೈಟ್ ಹಾಕಿದರೂ ಪ್ರಯೋಜನವಿಲ್ಲ,” ಎನ್ನುತ್ತಿದ್ದಾರೆ ಸ್ಥಳೀಯರು.

Provided by

Provided by

Provided by

Provided by

Provided by

Provided by

Provided by

Provided by

Provided by

Provided by

Provided by

Provided by
ಚಿಕ್ಕಮಗಳೂರು ಜಿಲ್ಲಾಡಳಿತ ಮತ್ತು ಸಂಚಾರಿ ಇಲಾಖೆ ಕೂಡಾ ಈ ಮಾರ್ಗದಲ್ಲಿ ಸಂಚರಿಸುವವರಿಗೆ ಎಚ್ಚರಿಕೆಯ ಸೂಚನೆ ನೀಡಿದ್ದಾರೆ.
ಪ್ರಸ್ತುತ ಸ್ಥಿತಿ: ವಾಹನಗಳ ಸಂಚಾರ ನಿಧಾನಗತಿಯಲ್ಲಿ ನಡೆಯುತ್ತಿದ್ದು, ಹಲವು ಕಡೆ ಟ್ರಾಫಿಕ್ ಜಾಮ್ ಕೂಡ ಉಂಟಾಗುತ್ತಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD




























