ಹೊಟ್ಟೆ ಕಿಚ್ಚಿನಿಂದ ಅಬ್ದುಲ್ ಕಲಾಂ ಅಭಿಮಾನಿಯ ಹತ್ಯೆ ಮಾಡಿದ ದುಷ್ಕರ್ಮಿ - Mahanayaka

ಹೊಟ್ಟೆ ಕಿಚ್ಚಿನಿಂದ ಅಬ್ದುಲ್ ಕಲಾಂ ಅಭಿಮಾನಿಯ ಹತ್ಯೆ ಮಾಡಿದ ದುಷ್ಕರ್ಮಿ

20/12/2020

ಕೊಚ್ಚಿ: ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಜನಪ್ರಿಯತೆ ಹೊಂದಿದ್ದ ವೃದ್ಧರೊಬ್ಬರನ್ನು ಅಸೂಯೆಯಿಂದ ಕೊಂದು ಹಾಕಿದ ಘಟನೆ ಕೇರಳದ ಕೊಚ್ಚಿಯಲ್ಲಿ ನಡೆದಿದ್ದು,  ಇಲ್ಲಿನ ಮರೀನ್ ಡ್ರೈವ್ ನಲ್ಲಿರುವ ಶಿವದಾಸನ್(63) ಹತ್ಯೆಗೀಡಾದವರಾಗಿದ್ದಾರೆ.

ಶಿವದಾಸನ್ ಅವರು ನಗರದಲ್ಲಿರುವ ಅಬ್ದುಲ್ ಕಲಾಂ ಅವರ ಪ್ರತಿಮೆಗೆ ಪ್ರತಿದಿನ ಹೂವಿನ ಅಲಂಕಾರ ಮಾಡುತ್ತಿದ್ದರು. ಈ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಶಿವದಾಸನ್ ಸಾಮಾಜಿಕ ಜಾಲತಾಣಗಳಲ್ಲಿ ಸ್ಟಾರ್  ಆಗಿರುವುದನ್ನು ಕಂಡು ರಾಜೇಶ್ ಎಂಬಾತ ತೀವ್ರವಾಗಿ ಹೊಟ್ಟೆ ಕಿಚ್ಚುಪಟ್ಟಿದ್ದ.

ಇದೇ ವಿಚಾರವಾಗಿ ಶಿವದಾಸನ್ ಜೊತೆಗೆ ರಾಜೇಶ್ ಜಗಳವಾಡಿದ್ದು, ಜಗಳವಾಡಿ ಕೆಲವೇ ದಿನಗಳಲ್ಲಿ ಅಬ್ದುಲ್ ಕಲಾಂ ಪ್ರತಿಮೆಯ ಬಳಿಯಲ್ಲಿ ಎಂದಿನಂತೆ ಮಲಗಿದ್ದ ಶಿವದಾಸನ್ ಅದೇ ಸ್ಥಳದಲ್ಲಿ ಹತ್ಯೆಗೀಡಾಗಿದ್ದರು.  ಈ ಬಗ್ಗೆ ಪೊಲೀಸರು ತನಿಖೆ ನಡೆಸಿದಾಗ ರಾಜೇಶ್ ನ ವಿಚಾರ ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ರಾಜೇಶ್ ನನ್ನು ಪೊಲೀಸರು ಬಂಧಿಸಿದ್ದಾರೆ.

Disclaimer:

www.mahanayaka.in ಅಂತರ್ಜಾಲ ಮಾಧ್ಯಮದಲ್ಲಿ ಪ್ರಕಟವಾದ ಸುದ್ದಿಗಳಲ್ಲಿ ಯಾರದ್ದೇ ಭಾವನೆಗಳಿಗೆ ಧಕ್ಕೆಯಾಗುವಂತಹ ಅಥವಾ ನೋವುಂಟಾಗುವಂತಹ ಅಥವಾ ನಿಮಗೆ ಆಕ್ಷೇಪಾರ್ಹ ಎನಿಸಿದಂತಹ ಅಂಶಗಳ ಬಗ್ಗೆ ಓದುಗರು 9686872149 ನಂಬರ್ ಗೆ ಸುದ್ದಿಯ ಲಿಂಕ್ ಸಹಿತ ನಿಮ್ಮ ದೂರು ಸಲಹೆಗಳನ್ನು ವಾಟ್ಸಾಪ್ ಮಾಡಬಹುದು. ಅಥವಾ ಕರೆ ಮಾಡಬಹುದು. ನಿಮ್ಮ ದೂರನ್ನು ಪರಿಶೀಲಿಸಿ, ಅಂತಹ ಆಕ್ಷೇಪಾರ್ಹ ಅಂಶಗಳನ್ನು ತೆಗೆದು ಹಾಕಲು ಮಾಧ್ಯಮವು ಬದ್ಧವಾಗಿದೆ.

ಇತ್ತೀಚಿನ ಸುದ್ದಿ