ಸಹಾಯಧನ ಪಡೆಯಲು ಅರ್ಜಿ ಆಹ್ವಾನ - Mahanayaka

ಸಹಾಯಧನ ಪಡೆಯಲು ಅರ್ಜಿ ಆಹ್ವಾನ

04/12/2020

ಹಾಸನ: ಚನ್ನರಾಯಪಟ್ಟಣ ಪುರಸಭೆಯ ವ್ಯಾಪ್ತಿಯ ಬಡ ಕುಟುಂಬದ ಶೇ. 7.25 (ಇತರೆ ಬಡವರು )ರಲ್ಲಿ ಪಿಯುಸಿ ಓದುತ್ತಿರುವ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಶೇ. 3 ರಲ್ಲಿ ಆರ್ಥಿಕ ನೆರವನ್ನು ವಿಕಲಚೇತನರಿಗಾಗಿ ಶ್ರವಣ ಸಾಧನ ಖರೀದಿಸಲು ಸಹಾಯಧನ, ಸ್ವಯಂ ಉದ್ಯೋಗಕ್ಕಾಗಿ ಸಹಾಯಧನ ಪಡೆಯಲು ಅರ್ಜಿಯನ್ನು ಆಹ್ವಾನಿಸಲಾಗಿದೆ.


ಆಸಕ್ತರು ನಿಗದಿತ ಅರ್ಜಿ ನಮೂನೆಯನ್ನು ಪುರಸಭೆ ಚನ್ನರಾಯಪಟ್ಟಣದಲ್ಲಿ ಮಾಹಿತಿ ಪಡೆದು ದಿನಾಂಕ 24/12/2020 ರ ಒಳಗಾಗಿ ಪುರಸಭೆ ಕಚೇರಿಗೆ ನೀಡತಕ್ಕದ್ದು, ಹೆಚ್ಚಿನ ವಿವರಗಳಿಗಾಗಿ ಚನ್ನರಾಯಪಟ್ಟಣ ಪುರಸಭೆ ಮುಖ್ಯಧಿಕಾರಿಯನ್ನು ಸಂಪರ್ಕಿಸಬಹುದು.

ಇತ್ತೀಚಿನ ಸುದ್ದಿ